ನಿಗದಿತ ಸಮಯದ ಒಳಗೆ ಪರಿಷ್ಕರಣೆ ಕೆಲಸ ಮುಗಿಸಿ : ಎಸಿ ಕುದರೆ ಸೂಚನೆ

Lead AnalystSite Administrator
Release DateJune 30, 2026
Intel Density5 min read
Signal Output:
ನಿಗದಿತ ಸಮಯದ ಒಳಗೆ ಪರಿಷ್ಕರಣೆ ಕೆಲಸ ಮುಗಿಸಿ : ಎಸಿ ಕುದರೆ ಸೂಚನೆ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ತರಬೇತಿ ಕಾರ್ಯಕ್ರಮ   

                                                                                                        ಬಸವಕಲ್ಯಾಣ: -ಭಾರತ ಚುನಾವಣೆ ಆಯೋಗ ಮತ್ತು ರಾಜ್ಯ ಚುನಾವಣೆ ಆಯೋಗದ ಆದೇಶ ದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಡುವ ಕಾರ್ಯವನ್ನು ನಿಗದಿತ ಸಮಯದ ಒಳಗೆ ಮುಗಿಸಿ ಕೊಡಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮಗೆ ನೀಡಿರುವ ಜವಬ್ದಾರಿಯನ್ನು  ಅರಿತು ಕೆಲಸ ಮಾಡಬೇಕು ಎಂದು ಬಸವಕಲ್ಯಾಣ ಸಹಾಯಕ ಆಯುಕ್ತರಾದ ಪ್ರಕಾಶ ಕುದರೆ ಹೇಳಿದರು. 

 ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ  ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಿಬ್ಬಂದಿಗಳಿಗೆ ಮಂಗಳವಾರ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ 57 ಸಾವಿರ ಫಾರಂಗಳನ್ನು ಭರ್ತಿ ಆಗಬೇಕಿದೆ. 278 ಎಸ್ಐಆರ್ ಕೇಂದ್ರಗಳನ್ನು  ಸ್ಥಾಪಿಸಲಾಗಿದೆ. ಹೀಗಾಗಿ ಸಂಬಂಧ ಪಟ್ಟ ನೋಡಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇಂದ್ರಗಳಲ್ಲಿ ಇಂಟರ್ನೇಟ್, ಸ್ಕ್ಯಾನರ್ ಮತ್ತು ಪ್ರೀಂಟರ್ ಗಳನ್ನು ಇಟ್ಟಿಕೊಳ್ಳಬೇಕು ಯಾವುದೇ ಕಾರಣಕ್ಕೂ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.               

            

ಎಸ್ಐಆರ್ ಕೆಲಸಕ್ಕಾಗಿ ನೇಮಕ ಗೊಂಡ ಸಿಬ್ಬಂದಿಗಳಿಗೆ ಜು.29 ವರೆಗೆ ರಜೆ ಕೊಡಬಾರದು ಮತ್ತು ಯಾವುದೇ ಕಾರಣಕ್ಕೂ ಕೆಲಸದಲ್ಲಿ ನಿರ್ಲಕ್ಷ ಮಾಡಬಾರದು. ಒಂದು ವೇಳೆ ನಿರ್ಲಕ್ಷ ಕಂಡು ಬಂದಲ್ಲಿ ದಂಡದ ಜೊತೆಗೆ ಶಿಕ್ಷೆ ನೀಡುವ ಅವಕಾಶ ಇದೆ ಆದ್ದರಿಂದ ಎಲ್ಲರು ಕೂಡಿಕೊಂಡ ಕೆಲಸ ಮಾಡುವ ಮೂಲಕ ಯಶಶ್ವಿಗೊಳಿಸಬೇಕು ಎಂದರು.   

 

 ನಂತರ ಬಸವಕಲ್ಯಾಣ ತಹಶೀಲ್ದಾರ ದತ್ತಾತ್ರೇಯ ಗಾದಾ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಗಾಗಲೇ ಡಿಇಒ ಗಳಿಗೆ ಮೋದಲನೆ ಹಂತರ ತರಬೇತಿ ನೀಡಿ ಎಲ್ಲರಿಗು ಜವಬ್ದಾರಿ ಹಂಚಿಕೆ ಮಾಡಲಾಗಿದೆ. ಹೀಗಾಗಿ ಒಬ್ಬ ವ್ಯಕ್ತಿಯು ಕೂಡ ಮತದಾರರ ಪಟ್ಟಿಯಿಂದ ಹೋರಗಡೆ ಉಳಿಯದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮಾಹಿತಿ ಅಪ್ಲೌಡ ಮಾಡುವಾಗ ಬಹಳ ಜವಬ್ದಾರಿಯಿಂದ ಮಾಡಬೇಕು ಎಂದರು. 

  

ಈ ಸಂದರ್ಭದಲ್ಲಿ ಹುಲಸೂರ ತಹಶೀಲ್ದಾರ ಶಿವಾನಂದ ಮೇತ್ರೆ, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಧರ ಛಲವಾದಿ, ಮಾಲೇಶ, ಐಇಸಿ ಸಂಯೋಜಕ ವೀರಾರೆಡ್ಡಿ ಹಾಗೂ ಬಿಎಲ್ಓ, ಡಿಇಒ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು ಇದ್ದರು.